Wednesday, September 24, 2008

ಶ್ರೀ ಬ್ರಹ್ಮಾನಂದ ಮಹಾರಾಜರು ಹೇಳಿಕೊಟ್ಟ ಒಂದು ಭಜನೆ.

ರಾಮ ರಾಮ ರಾಮ ಸೀತಾ ರಾಮ ರಾಮ ಅನ್ನಿರಿ, ರಾಮಸ್ಮರಣೆಯ ಹೊರ್ತುಕಾಲ ವ್ಯರ್ಥ ಕಳೆಯಬೇಡಿರಿ.
ಸ್ನಾನಸಂಧ್ಯಾ ನಿತ್ಯನೇಮ ಜಪವತಪವನು ಮಾಡಿರಿ, ಸಾಯೋಸಂಕಟ ಬಂದರೂ ಪರಧರ್ಮ ಹಿಡಿಯಬೇಡಿರಿ.
ತಂದೆ ತಾಯಿ ಬಂಧು ಬಳಗವು ಮಿಥ್ಯವೆಂದು ತಿಳಿಯಿರಿ, ನಂದು ನಾನೆಂದೆಂಬ ಮೋಹವ ಬಿಟ್ಟು ರಾಮನ ಭಜಿಸಿರಿ.
ಕಾಮ ಕ್ರೋಧ ಮೋಹ ಬಿಟ್ಟು ಮನಸು ಜಳಜಳಮಾದಿರಿ, ಕಾಯವಾಚ ಮನಸಿನಿಂದ ಗುರುವಿಗೆ ಶರಣ್ಹೋಗಿರಿ.
ಪರರನಾರಿ ಪರರದ್ರವ್ಯ ನರಕವೆಂದು ತಿಳಿಯಿರಿ, ಚಿಂತೆಯಿಲ್ಲದೆ ರಾಮಚಿಂತಿಸಿ ಜನನ ಮರಣವ ನೀಗಿರಿ.
ಭಕ್ತಿಭಾವದಿಂದ ಸದ್ಗುರು ಹರಿಯು ಹರನೆನ್ದರಿಯಿರಿ, ಗುರುವಿನಪ್ಪಣೆಯಂತೆ ನಡೆದರೆ ಮುಕ್ತಿಯೆಂದು ತಿಳಿಯಿರಿ.
ದಿವಸರಾತ್ರೆ ಸಾಧುಸಂತರ ಸಂಘವನ್ನೇ ಬಯಸಿರಿ, ಬ್ರಹ್ಮಾನಂದರು ಸಾರಿಹೇಳುವ ರಾಮನಾಮವ ಜಪಿಸಿರಿ.
.