Wednesday, May 21, 2014

Moksha praaptiya Guttu - Sri Brahmananda Maharaj

                                                     ಶ್ರೀ ರಾಮ ಸಮರ್ಥ 
                              ಸದ್ಗುರು ಶ್ರೀ  ಬ್ರಹ್ಮಾನಂದ ಮಹಾರಾಜರು ಹೇಳಿದ ಮೋಕ್ಷ ಪ್ರಾಪ್ತಿಯ ಗುಟ್ಟು
                                              ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜ್ ಕೀ ಜೈ 
  ಪರಮ ಪ್ರಾಪ್ತಿ, ಸದ್ಗತಿ ಆಗಬೇಕೆಂದು ಪೂರ್ಣ ಇಚ್ಛಾ - ಖರೆ ಇರಾದಾ ಇದ್ದವರು ಸದಾ ಸರ್ವದಾ ಅಖಂಡ ರಾಮನಾಮ ಸ್ಮರಣೆ ಮಾಡಬೇಕು . ಅಹೇತುಕ  ಅವ್ಯಭಿಚಾರಿಣಿ ಶ್ರೀ ರಾಮಭಕ್ತಿ ಮಾಡಿ ಕೃತಾರ್ಥ ರಾಗಬೇಕು . ಈ ಘೋರ ಕಲಿಯುಗದಲ್ಲಿ ಪಾರಾಗಬೇಕಾದರೆ ಭಗವದ್ಭಕ್ತಿ ರಾಮನಾಮ ಸ್ಮರಣ ದ ಹೊರತು  ಎರಡನೇ ಉಪಾಯವಾವುದೂ ಇಲ್ಲ .
ಆಯುಷ್ಯದ್ದು ಭರವಸೆ ಇಲ್ಲ . ಆದಷ್ಟು ತೀವ್ರವಾಗಿ ಕೃ ತಾರ್ಥ ರಾಗಲಿಕ್ಕೆ  ಪ್ರಯತ್ನ ಮಾಡಬೇಕು . ಪಾರಮಾರ್ಥಕ್ಕೆ ಮೊದಲ ಸಾಧನಾ ಸತ್ಸಂಗತಿ  ಸಾಧು ಸಂಗತಿಯಿಂದ ಎಷ್ಟೋ ಜನರು ಪಾರಾಗಿ ಹೋದರು  ಸಾಧು ಸಂಗತಿಯಿಂದ ಕ್ಷಮಾ , ಭೂತದಯಾ , ಶಾಂತಿ, ವೈರಾಗ್ಯ, ಸಮಾಧಾನ, ವಿವೇಕ, ಪ್ರವೃತ್ತಿ ಮಾರ್ಗದ ತ್ಯಾಗ, ನಿವೃತ್ತಿ ಮಾರ್ಗದ ಗಮನ ಇತ್ಯಾದಿ ಅನೇಕ ಸನ್ಮಾರ್ಗ ಗಳು ಪ್ರಯತ್ನ ಮಾಡದೆ ಲೇ ದೊರೆಯುತ್ತವೆ  ಕಾಮ-ಕ್ರೋಧಾದಿ ಷದ್ವೈ ರಿಗಳೂ , ಪಾರಮಾರ್ಥಕ್ಕೆ ವಿಘ್ನ ಮಾಡತಕ್ಕಂಥ ದಂಭ ಅಹಂಕಾ ರಾದಿ ಗಳೂ  ತಮ್ಮಷ್ಟಕ್ಕೆ ತಾವೇ ಲಯ ಹೊಂದುತ್ತವೆ ಸಾಧು ಸಂಗತಿ ಮಹಿಮಾ ಅಗಾಧವದೆ  ಸಾಧುಗಳಲ್ಲಿ ಸದೋದಿತ ಭಗವತ್ಚರ್ಚ , ಭಗವದ್ಗುಣಾನುವರ್ಣನ , ರಾಮನಾಮಸ್ಮರಣ , ಸದೋಪದೇಶ ಅಹೋ ರಾತ್ರಿ ನಡೆದಿರುತ್ತದೆ. ಅಲ್ಲಿ ವಾಸಮಾಡಿದವರಿಗೆ ಇದನ್ನೆಲ್ಲಾ ಕೇಳಿ ಕೇಳಿ ಪರಮಾತ್ಮನಲ್ಲಿ ತದಾಕಾರವೃತ್ತಿ ಆಗುತ್ತದೆ. ಪರಮಾತ್ಮನಲ್ಲಿ ವೃತ್ತಿ ಲಯವಾದರೆ ಜೀವನ್ಮುಕ್ತ ನಾಗುತ್ತಾನೆ

ವಿಷಯಾಕಾರ ವೃತ್ತಿ ಯಿಂದ ಬಂಧಾ, ಪರಮಾತ್ಮಾಕಾರ ವೃತ್ತಿ ಯಿಂದ ಮೋಕ್ಷಾ . ವೃತ್ತಿಗೆ ವಿಷಯದ ಸಂಭಂಧವಾಗದೆ ಇರಲಿಕ್ಕೆ ಸದೋದಿತ ಭಗವದನುಸಂಧಾನವೇ ಕಾರಣ.  ಕೂತಾಗ, ನಿಂತಾಗ, ಮಲಗಿದಾಗ, ಹೋಗೋವಾಗ, ಬರೋವಾಗ ಸದಾ ಸರ್ವದಾ ರಾಮಧ್ಯಾನ ಮಾಡುತ್ತಿರಬೇಕು. ರಾಮನಾಮ ಬಿಟ್ಟು ವಿಷಯದ ಕಡೆ ಹೋಗಲಿಕ್ಕೆ ವೃತ್ತಿಗೆ ಸವಡ  ಕೊಡಬಾರದು.

"ಹೇ ರಾಮಾ, ಹೇ ದಯಾನಿಧೇ ! ನನ್ನ ಎಂದು  ಉಧ್ಧಾರ ಮಾಡುವೆ? ನಿನ್ನ ಸಗುಣ ಮೂರ್ತಿ ಎಂದು ಕಂಡೇನು? ರಾಮಾ, ನಾನು ಅಗಾಧ ಪಾಪಿ ಇದ್ದೇನೆ. ನನ್ನಂಥ ಕೆಟ್ಟವರು ಜಗತ್ತಿನಲ್ಲಿ ಯಾರೂ ಇಲ್ಲ.  ಹೇ ದಯಾ ಸಮುದ್ರಾ , ರಾಮಾ , ತೀವ್ರವಾಗಿ ಭವ ಸಮುದ್ರವನ್ನು ದಾಟಿಸು.. ಸಂತತಿ, ಸಂಪತ್ತು ಮೊದಲಾದ ಐಹಿಕ ಪಾರತ್ರಿಕ ಸುಖವು ಏನೂ ಬೇಡ . ನಿನ್ನ ದೃಢ ಭಕ್ತಿ ಕೊಡು .ನನ್ನ ನಾಲಿಗೆಯಲ್ಲಿ ಸದಾ ರಾಮ (ನಿನ್ನ) ನಾಮವಿರಲಿ . ಕಿವಿಗಳು ರಾಮಾ , (ನಿನ್ನ) ಕಥಾ ಕೇಳಲಿ. ಕೈಗಳಿಂದ ರಾಮ (ನಿನ್ನ) ಪೂಜಾ ಸಂಮಾರ್ಜನಾದಿ  ಸೇವಾ  ಘಡಾಯಿಸಲಿ , ಪಾದಗಳಿಂದ ಪ್ರದಕ್ಷಿಣಾ ಘಡಾಯಿಸಲಿ. . ರಾಮಾ!  ನಾನು ಅಜ್ಞಾನಿ  ಇದ್ದೇನೆ.  ಏನೋ ತಿಳುವಳಿಕೆಯಿಲ್ಲ .ನೀನೇ ನನ್ನ ಹೃದಯದಲ್ಲಿ ನಿಂತು, ನಿನ್ನ ಪಾದದಲ್ಲಿ ಪ್ರೇಮ ಹುಟ್ಟುವಂತೆ ಮಾಡು. . ಶ್ರೀರಾಮಾ , ನಿನ್ನ ಹೊರತು ನನಗೆ ಯಾರೂ ಆಧಾರ ಇಲ್ಲ . ನೀನೆ ತಂದೆ, ತಾಯಿ, ಬಂಧು, ಬಳಗಾ, . ಹೇ ಕೃಪಾಸಾಗರಾ!  ಶ್ರೀ ರಾಮಾ! ಅಜ್ಞಾನಾಧ್ವಾಂತ  ನಿವಾರಣಾ , ನೀನೇ ಗತಿ ಎಂದು ಅನನ್ಯಭಾವದಿಂದ  ಶರಣು  ಹೋಗಬೇಕು.  ಸಹಸಾ  ಪಾಪಮಾರ್ಗದ ಕಡೆ ಪ್ರವೃತ್ತಿ ಇರಬಾರದು . ಸುಳ್ಳು ಕೆಲಸಕ್ಕೆ ಹೋಗಬಾರದು . ಜನರು ನಿಂದಾ -ಮಾಡಿದರೆ  ವಿಷಾದ ಪಡಬಾರದು . ಸ್ತುತಿ ಮಾಡಿದರೆ ಹರ್ಷ ಪಡಬಾರದು . ಜನರ ನಿಂದಾ-ಸ್ತುತಿ  ಮಾಡಬಾರದು . ಸರ್ವತ್ರದಲ್ಲಿ ಪರಮಾತ್ಮ ಇದ್ದಾನೆ..  ಹೆಂಡರು ಮಕ್ಕಳು, ಮನೆ, ಹೊಲಾ. ಸಂಪತ್ತು ಮೊದಲಾದ ದೃಶ್ಯ ಪದಾರ್ಥ ಮಿಥ್ಯಾ ಎಂದು ತಿಳಿಯಬೇಕು . ದೇವರು ಒಬ್ಬನೇ ಶಾಶ್ವತ. . ಅಹೋ ರಾತ್ರಿ ರಾಮಭಜನೆಯಲ್ಲೇ ಕಾಲ ಕ್ರಮಣ ಮಾಡಬೇಕು.
                                               ಜಯ ಜಯ ರಘುವೀರ ಸಮರ್ಥ
                                                                                 


                                                                                                                                                                                

Tuesday, May 13, 2014

Satsang at Shri Amit Brahme's House (11-5-2014)

Satsang
Chintamani devotees of Sri Maharaj accompanied Sri Maharaj's Padukas to Smt Prachi and Sri Amit Brahme's house on the outer ring road of Bangalore. Japanushthan, Bhajans and Arathi were performed under the guidance of Sri G.H.Venkatesh Murthy. Brahmes had made good arrangements. Many Maharashtrian devotees of Maharaj attend the function. The divine marble idols of Sri Ram,Sita, Lakshman, Maruthi and Sri Brahmachaitanya Maharaj Graced the occasion.