Wednesday, April 8, 2009

ಜಿ.ಜಯರಾಂ ರವರ ಕವನ


ಶ್ರೀ ರಾಮಶೇಷಯ್ಯ ನವರ ನೂರನೇ ಹುಟ್ಟುಹಬ್ಬದ ಅಂಗ ವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ರಾಮದಾಸೀ ಭಿಕ್ಷದ ನೆನೆಪಿಗಾಗಿ ಶ್ರೀಜಿ. ಜಯರಾಮ್ ರವರು ರಚಿಸಿದ ಒಂದು ಕವನ.
ರಾಮದಾಸೀ ಭಿಕ್ಷೆ.

ರಾಮದಾಸೀ ಭಿಕ್ಷೆ ಅಂತಿಂತ ಭಿಕ್ಷೆಯಲ್ಲಸ್ವತಃಪರಮಶಿವನು ಬೇಡಿದ ಭಿಕ್ಷೆರಾಮದಾಸರು ಅಂದು ಜೋಳಿಗೆ ಧರಿಸಿರಾಮನಾಮವ ಪಠಿಸಿ ಬೇಡಿದ ಭಿಕ್ಷೆ //೧//
ಪರಮ ಪಾವನ ಭಿಕ್ಷೆ ಪತಿತಪಾವನ ಭಿಕ್ಷೆಅನ್ನಪೂರ್ಣೆಯು ಸ್ವತಹ ಕರುಣಿಸಿದ ಭಿಕ್ಷೆಪಾಪವೆಲ್ಲವ ತೊಳೆವ ಪದುಮನಾಭನ ಭಿಕ್ಷೆಪಾಮರರಿಗೆ ಇದು ಸ್ವರ್ಗಸುಖದ ಭಿಕ್ಷೆ /೨/
ಬ್ರಹ್ಮಾನಂದ ಮಹಾರಾಜರು ಆಶೀರ್ವದಿಸಿದ ಜೋಳಿಗೆಪೂಜ್ಯ ವೆಂಕಣ್ಣಯ್ಯನವರ ಕೃಪೆಯಿಂಕೂಡಿದ ಜೋಳಿಗೆರಾಮಶೇಷಯ್ಯನವರ ಪಾಲಿಗಿದು ಅಕ್ಷ್ಯದ ಜೋಳಿಗೆಗುರುಶಿಷ್ಯ ಸಂಬಂಧಕೆ ನಾಂದಿಯಾದ ಜೋಳಿಗೆ /೩/
ಪ್ರತಿ ಗುರುವಾರದಂದು ನಗರ ಪ್ರದಕ್ಷಿಣೆ ಹಾಕಿಪೂಜ್ಯ ರಾಮಶೇಷಯ್ಯನವರು ಬೇಡಿದ ಭಿಕ್ಷೆನಗರವಾಸಿ ಜನಕೆ ಶ್ರೀರಾಮ ಭಿಕ್ಷೆಯ ನೀಡಿಸದ್ಭಕ್ತರನ್ನಾಗಿಸಿದ ಅಕ್ಷಯ ರಾಮದಾಸೀ ಭಿಕ್ಷೆ /೪/
ಹೆಗಲಲ್ಲಿ ಜೋಳಿಗೆ ಕೈಯಲ್ಲಿ ಝೇಂಕರಿಪ ತಾಳಕಾಲಲ್ಲಿ ಗೆಜ್ಜೆ ಘಲು ಘಲು ಎಂಬ ಚಂದ ನಿನಾದಹಣೆಯಲ್ಲಿ ಗಂಧ ತಿಲಕ ಮುಖದ ಕಾಂತಿಗೆ ಪ್ರೇರಕವದನದಲಿ ಸಿಹಿನಾಮ ರಘುಪತಿ ರಾಘವ ರಾಜಾರಾಮ /೫/
ಹಗಲಿಂದ ಸಂಜೆಯವರೆಗೆ ಬರಿ ಶ್ರೀ ರಾಮ ನಾಮಅದ ಬಿಟ್ಟು ಅನ್ಯ ಮಾತಿಲ್ಲ ಸಂಸಾರ ಝಂಜಾಟವಿಲ್ಲಬಿಸಿಲಿರಲಿ ಮಳೆಬರಲಿ ಬಿರುಗಾಳಿಯ ಅಬ್ಬರವಿರಲಿನಡೆಸಿದರು ರಾಮದಾಸಿ ಭಿಕ್ಷೆ ದಶಕಗಳವರೆಗೆ /೬/
ಮನೆಮನೆಯ ಭಕ್ತರು ದಾರಿಹೋಕರು ಎಲ್ಲಹಾಕುತ್ತಿದ್ದರು ಧನಧಾನ್ಯವನು ಜೋಳಿಗೆಯಲ್ಲಿಪಾದವನು ಮುಟ್ಟಿ ಭಕ್ತಿಲಿ ನಮಸ್ಕರಿಸುತಲಿಧನ್ಯರಾದೆವು ಎಂದು ಸದಾ ಬಾವಿಸುತಲಿ /೭/
ಈ ಮಹನೀಯರ ಜನ್ಮಶತಾಬ್ಧಿಯ ಸವಿ ನೆನಪಿಗಾಗಿಮಾಡುವೆವು ಇಂದು ನಾವುಗಳು ರಾಮದಾಸಿ ಭಿಕ್ಷೆಜಗವೆಲ್ಲ ರಾಮ ಮಯವಾಗಿ ಜನರೆಲ್ಲ ರಾಮನಂತಾಗಿಜಗದಿ ಬಾಳಲಿ ಎನುತ ಬೇಡುವನು ಚೈತನ್ಯ ದಾಸ /೮/