Friday, June 16, 2023

ಆರತಿ ಬೆಳಗುವೆ ಸದ್ಗುರು ಶ್ರೀ ಬ್ರಹ್ಮಚೈತನ್ಯ

ಆರತಿ ಬೆಳಗುವೆ ಸದ್ಗುರು ಶ್ರೀ ಬ್ರಹ್ಮಚೈತನ್ಯ ಪರಬ್ರಹ್ಮಾ ಪರಾತ್ಪಾರಾ ಸನಕಾದಿತ ಮಾನ್ಯಾ ನಿತ್ಯಶುದ್ಧ ನಿಜಾನಂದ ನಿರುಪಮವೈಭವ | ನೀರಂಜನ ನಿಷ್ಪ್ರಪಂಚ ನಿಜಜನ ಭವದಾವಾ ನಿರೀಹ ನಿರ್ಮಲ ಮುನಿಗಣ ನುತಪದ ಕಾಯೋ ರಾಘವ || ಆರತಿ ಬೆಳಗುವೆ ಸದ್ಗುರು ಶ್ರೀ ಬ್ರಹ್ಮಚೈತನ್ಯ ಪರಬ್ರಹ್ಮಾ ಪರಾತ್ಪಾರಾ ಸನಕಾದಿತ ಮಾನ್ಯಾ ವಾರಣಾಸೀ ಕ್ಷೇತ್ರದಿ ಪ್ರೇತವ ಬದುಕಿಸಿದಾತನೇ| ಇದ್ದಲ್ಲಿದ್ದು ದೂರಿನ ಭಕ್ತಗೆ ದರ್ಶನಕೊಟ್ಟವನೇ ಒಂದು ಪಾವಿನ ಅನ್ನವ ಸಾವಿರ ಮಂದಿಗುಣಿಸಿದವನೇ | ಆರತಿ ಬೆಳಗುವೆ ಸದ್ಗುರು ಶ್ರೀ ಬ್ರಹ್ಮಚೈತನ್ಯ ಪರಬ್ರಹ್ಮಾ ಪರಾತ್ಪಾರಾ ಸನಕಾದಿತ ಮಾನ್ಯಾ ಸುಂದರಾನನಾ ಕುಂದರದನ ಇಂದೀವರನಯನ| ಮಂದಸ್ಮಿತ ಹೃನ್ಮಂದಿರ ಸ್ಥಾಪಿತ ಇಂದಿರಾರಮಣ | ಗಂಧವಾಹಪ್ರಿಯ ಪಾಹಿ ಪಾಹಿ ಬ್ರಹ್ಮಾನಂದನ್ನ || ಆರತಿ ಬೆಳಗುವೆ ಸದ್ಗುರು ಶ್ರೀ ಬ್ರಹ್ಮಚೈತನ್ಯ ಪರಬ್ರಹ್ಮಾ ಪರಾತ್ಪಾರಾ ಸನಕಾದಿತ ಮಾನ್ಯಾ

No comments: